ಅನಿ'ಸಿಕೆ :-
ಕ್ಷಣಿಕ ಉದ್ವೇಗ ತೀವ್ರವಾದ ಭಾವನಾತ್ಮಕ ಕೃತ್ಯಗಳು ಖಂಡಿಸಿದಾಗ ಪ್ರತಿಭಟನೆ ಅಥವಾ ಮಾತುಕತೆ ಇಂದ ಸರಿ ಹೋಗಬಹುದು. ಆದರೆ ಅಂಧಶ್ರದ್ಧೆ ಅಥವಾ ಕ್ರೂರ ಮಾನಸಿಕತೆ ಹಿನ್ನೆಲೆಯಲ್ಲಿ ನ ಸಮಸ್ಯೆಗಳನ್ನು ಬೇರೇ ರೀತಿಯಲ್ಲೇ ಬಗೆಹರಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು. ಇದು ಶಾಂತಿ ಮಂತ್ರ ಕ್ಕೆ ಬಗ್ಗುವ ಒಗ್ಗುವ ಕರಗುವ ಮಾನಸಿಕತೆಯಲ್ಲ. ಇದೆಲ್ಲ ಒಂದು ಯೋಜಿತ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ನಡೆಯುತ್ತಿರುವ ಚಟುವಟಿಕೆ ಈ ಎಲ್ಲದರ ಮೂಲ ಮತ್ತು ಇದರ ಹಿಂದಿನ ಕೈಗಳು ಎಂದಿಗೂ ಈ ಕೃತ್ಯಗಳ ಕುರುಹನ್ನು ಅಂಟಿಸಿಕೊಳ್ಳುವುದಿಲ್ಲ ಹಾಗೂ ಸದಾ ಶುಭ್ರವಾದಂತೆ ತೋರುತ್ತವೆ.
ಹಾಗೇ ಇಂಥಹದನ್ನು ಖಂಡಿಸಿ ನಡೆಸುವ ಪ್ರತಿಭಟನೆಗಳು ನಮ್ಮ ನಡುವೆ ಆಂತಕ ಸೃಷ್ಟಿಸಿ ಭಯವನ್ನು ಸೃಷ್ಟಿಸುವಂತೆ ಮಾಡುವ ಬದಲು ಎಚ್ಚರಿಕೆ ಘಂಟೆಯ ಹಾಗೆ ಸದಾ ಮೊಳಗುತ್ತಿರಬೇಕು.
ನಮ್ಮ ಸಂಕಟ ನೋವು ಇಂಥ ಕೃತ್ಯಗಳನ್ನು ಮತ್ತಷ್ಟು ಬಲಪಡಿಸುವ ಸರಕಾಗದೇ ನಮ್ಮ ಆಲೋಚನೆಗಳನ್ನು ಸ್ವಲ್ಪ ಮಟ್ಟಿಗೆ ಪರಾಮರ್ಶೆ ನಡೆಸಿ ಬದಲಾಗುವ ಮೂಲಕ ಇಂಥ ಚಟುವಟಿಕೆಗಳಿಗೆ ಪುಷ್ಠಿಕೊಡುವ ಮೂಲಗಳೊಂದಿಂಗೆ ನಮ್ಮ ವ್ಯವಹಾರಗಳಿಗೆ ಕಡಿವಾಣ ಹಾಕಬೇಕು ಹಾಗೂ ಇಂಥವನ್ನು ಬೆಂಬಲಿಸುವ ಮನಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ನಡೆ ಯನ್ನು ಬದಲಿಸಿಕೊಂಡು ಅವಲಂಬನೆ ಕಡಿಮೆ ಮಾಡಿಕೊಳ್ಳುವುದು ಅನಿವಾರ್ಯ.
ತುಂಬಾ ಆಳದಿಂದ ಸರಿಯಾದ ಚಿಕಿತ್ಸೆ ಆಗಬೇಕಾದ ಪರಿಸ್ಥಿತಿ ಇದೆ ಮುಲಾಮುಗಳಿಗೆ ವಾಸಿಯಾಗುವ ಗಾಯವಲ್ಲ ಈ ಭಯೋತ್ಪಾದನೆ, ಧೈರ್ಯ ತೋರಲೇ ಬೇಕಾಗಿದೆ, ಭಯೋತ್ಪಾದನೆ ಎಂಬುದು ಸ್ವಯಂಪ್ರೇರಿತವೇ ಆದರೆ ಎಷ್ಟು ಕಾಲ ಸಾಧ್ಯ!? ಇದರ ಪ್ರೇರಣೆ ಪೋಷಣೆ ಗೆ ಒಂದು ತಿಲಾಂಜಲಿ ಅಗತ್ಯವಿದೆ.!
ಉರಿವ ಬೆಂಕಿಗೆ ನಮ್ಮನ್ನು ಕಟ್ಟಿಗೆಯಂತೆ ತೈಲದಂತೆ ಬಳಸಲಾಗುತ್ತಿದೆ ನಾವು ನಮ್ಮ ದುಡಿಮೆ ಸಹಕಾರ ಸಹಾಯ ವನ್ನು ಇಂಥ ವಿಚಾರಗಳನ್ನು ಬೆಂಬಲಿಸುವ ಈ ಕೃತ್ಯಗಳನ್ನು ಸಮರ್ಥನೆಮಾಡುವ ಯಾವುದೇ ವ್ಯಕ್ತಿ ಸಂಸ್ಥೆ ಹಾಗೂ ಈ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸದವರೊಂದಿಗೆ ವ್ಯವಹಾರಗಳಿಂದ ದೂರ ಇರ್ಬೇಕಾದ್ದು ಮೊದಲ ಹೆಜ್ಜೆ. ಪ್ರತಿಯೊಂದು ಇಂಥ ಘಟನೆಗಳು ನಮಗೆ ಎಚ್ಚರಿಕೆ ಹಾಗೂ ಪರೀಕ್ಷೆಗಳೇ ಅಸ್ತಿತ್ವಕ್ಕೆ! ಕಾರ್ಯೋನ್ಮುಖರಾಗದ ಹೊರತು ಮುಂದೆ ಪ್ರತಿಭಟನೆಗಳಿಗೆ ಯಾವುದೇ ಬೆಲೆ ಇಲ್ಲ ಹಾಗೂ ಅದು ಅವರ ಕೃತ್ಯಕ್ಕೆ ಮತ್ತೆ ಉತ್ತೇಜನ ನೀಡುತ್ತದೆ. ಭಯೋತ್ಪಾದನೆ ಗೆ ಧೈರ್ಯ ವೇ ಉತ್ತರ.
ಆ ಧೈರ್ಯ ನಮ್ಮಲ್ಲಿ ನಮ್ಮ ನಿತ್ಯ ಜೀವನದಲ್ಲಿ ನಮ್ಮ ಕೆಲಸಗಳಲ್ಲಿ ನಮ್ಮ ಸ್ವಾವಲಂಬನೆಯಲ್ಲಿ ವ್ಯಕ್ತವಾಗಬೇಕು!
ಜೈ ಹಿಂದ್! ವಂದೇ ಮಾತರಂ!
No comments:
Post a Comment