Wednesday, April 23, 2025

ಭಯೋತ್ಪಾದನೆ ಗೆ ಧೈರ್ಯ ವೇ ಉತ್ತರ!!

 ಅನಿ'ಸಿಕೆ :-

ಕ್ಷಣಿಕ ಉದ್ವೇಗ ತೀವ್ರವಾದ ಭಾವನಾತ್ಮಕ ಕೃತ್ಯಗಳು ಖಂಡಿಸಿದಾಗ ಪ್ರತಿಭಟನೆ ಅಥವಾ ಮಾತುಕತೆ ಇಂದ ಸರಿ ಹೋಗಬಹುದು. ಆದರೆ   ಅಂಧಶ್ರದ್ಧೆ ಅಥವಾ ಕ್ರೂರ ಮಾನಸಿಕತೆ  ಹಿನ್ನೆಲೆಯಲ್ಲಿ ನ ಸಮಸ್ಯೆಗಳನ್ನು ಬೇರೇ ರೀತಿಯಲ್ಲೇ ಬಗೆಹರಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು. ಇದು ಶಾಂತಿ ಮಂತ್ರ ಕ್ಕೆ ಬಗ್ಗುವ ಒಗ್ಗುವ ಕರಗುವ ಮಾನಸಿಕತೆಯಲ್ಲ. ಇದೆಲ್ಲ ಒಂದು ಯೋಜಿತ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ನಡೆಯುತ್ತಿರುವ ಚಟುವಟಿಕೆ ಈ ಎಲ್ಲದರ ಮೂಲ ಮತ್ತು ಇದರ ಹಿಂದಿನ ಕೈಗಳು ಎಂದಿಗೂ ಈ ಕೃತ್ಯಗಳ ಕುರುಹನ್ನು ಅಂಟಿಸಿಕೊಳ್ಳುವುದಿಲ್ಲ ಹಾಗೂ ಸದಾ ಶುಭ್ರವಾದಂತೆ ತೋರುತ್ತವೆ.

ಹಾಗೇ ಇಂಥಹದನ್ನು ಖಂಡಿಸಿ ನಡೆಸುವ ಪ್ರತಿಭಟನೆಗಳು ನಮ್ಮ ನಡುವೆ ಆಂತಕ ಸೃಷ್ಟಿಸಿ ಭಯವನ್ನು ಸೃಷ್ಟಿಸುವಂತೆ ಮಾಡುವ ಬದಲು ಎಚ್ಚರಿಕೆ ಘಂಟೆಯ ಹಾಗೆ ಸದಾ ಮೊಳಗುತ್ತಿರಬೇಕು.

ನಮ್ಮ ಸಂಕಟ ನೋವು ಇಂಥ ಕೃತ್ಯಗಳನ್ನು ಮತ್ತಷ್ಟು ಬಲಪಡಿಸುವ ಸರಕಾಗದೇ ನಮ್ಮ ಆಲೋಚನೆಗಳನ್ನು ಸ್ವಲ್ಪ ಮಟ್ಟಿಗೆ ಪರಾಮರ್ಶೆ ನಡೆಸಿ ಬದಲಾಗುವ ಮೂಲಕ ಇಂಥ ಚಟುವಟಿಕೆಗಳಿಗೆ ಪುಷ್ಠಿಕೊಡುವ ಮೂಲಗಳೊಂದಿಂಗೆ ನಮ್ಮ ವ್ಯವಹಾರಗಳಿಗೆ ಕಡಿವಾಣ ಹಾಕಬೇಕು ಹಾಗೂ ಇಂಥವನ್ನು ಬೆಂಬಲಿಸುವ ಮನಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ನಡೆ ಯನ್ನು ಬದಲಿಸಿಕೊಂಡು ಅವಲಂಬನೆ ಕಡಿಮೆ ಮಾಡಿಕೊಳ್ಳುವುದು ಅನಿವಾರ್ಯ.

ತುಂಬಾ ಆಳದಿಂದ ಸರಿಯಾದ ಚಿಕಿತ್ಸೆ ಆಗಬೇಕಾದ ಪರಿಸ್ಥಿತಿ ಇದೆ ಮುಲಾಮುಗಳಿಗೆ ವಾಸಿಯಾಗುವ ಗಾಯವಲ್ಲ ಈ ಭಯೋತ್ಪಾದನೆ, ಧೈರ್ಯ ತೋರಲೇ ಬೇಕಾಗಿದೆ, ಭಯೋತ್ಪಾದನೆ ಎಂಬುದು ಸ್ವಯಂಪ್ರೇರಿತವೇ ಆದರೆ ಎಷ್ಟು ಕಾಲ ಸಾಧ್ಯ!? ಇದರ ಪ್ರೇರಣೆ ಪೋಷಣೆ ಗೆ ಒಂದು ತಿಲಾಂಜಲಿ ಅಗತ್ಯವಿದೆ.!

ಉರಿವ ಬೆಂಕಿಗೆ ನಮ್ಮನ್ನು ಕಟ್ಟಿಗೆಯಂತೆ ತೈಲದಂತೆ ಬಳಸಲಾಗುತ್ತಿದೆ ನಾವು ನಮ್ಮ ದುಡಿಮೆ ಸಹಕಾರ ಸಹಾಯ ವನ್ನು ಇಂಥ ವಿಚಾರಗಳನ್ನು ಬೆಂಬಲಿಸುವ ಈ ಕೃತ್ಯಗಳನ್ನು ಸಮರ್ಥನೆಮಾಡುವ ಯಾವುದೇ ವ್ಯಕ್ತಿ ಸಂಸ್ಥೆ ಹಾಗೂ ಈ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸದವರೊಂದಿಗೆ ವ್ಯವಹಾರಗಳಿಂದ ದೂರ ಇರ್ಬೇಕಾದ್ದು ಮೊದಲ ಹೆಜ್ಜೆ. ಪ್ರತಿಯೊಂದು ಇಂಥ ಘಟನೆಗಳು ನಮಗೆ ಎಚ್ಚರಿಕೆ ಹಾಗೂ ಪರೀಕ್ಷೆಗಳೇ ಅಸ್ತಿತ್ವಕ್ಕೆ! ಕಾರ್ಯೋನ್ಮುಖರಾಗದ ಹೊರತು ಮುಂದೆ ಪ್ರತಿಭಟನೆಗಳಿಗೆ ಯಾವುದೇ ಬೆಲೆ ಇಲ್ಲ ಹಾಗೂ ಅದು ಅವರ ಕೃತ್ಯಕ್ಕೆ ಮತ್ತೆ ಉತ್ತೇಜನ ನೀಡುತ್ತದೆ. ಭಯೋತ್ಪಾದನೆ ಗೆ ಧೈರ್ಯ ವೇ ಉತ್ತರ.

ಆ ಧೈರ್ಯ ನಮ್ಮಲ್ಲಿ ನಮ್ಮ ನಿತ್ಯ ಜೀವನದಲ್ಲಿ ನಮ್ಮ ಕೆಲಸಗಳಲ್ಲಿ ನಮ್ಮ ಸ್ವಾವಲಂಬನೆಯಲ್ಲಿ ವ್ಯಕ್ತವಾಗಬೇಕು!


ಜೈ ಹಿಂದ್! ವಂದೇ ಮಾತರಂ!

Friday, April 18, 2025

ಅನಿ'ಸಿಕೆ :- ಎಷ್ಟು ದ್ವೇಷ ಇದೆ ಜನಿವಾರದ ಮೇಲೆ.. 🙂

 ಅನಿ'ಸಿಕೆ :-

ಎಷ್ಟು ದ್ವೇಷ ಇದೆ ಜನಿವಾರದ ಮೇಲೆ.. 🙂

ಇದು ಸಮಾಜದ ಸಾಮರಸ್ಯ ಕದಡುವ ಹುನ್ನಾರ ಜನರ ಗಮನ ಬೇರೆಡೆ ಸೆಳೆಯೋ ಯೋಚನೆ ಅನ್ಬೇಕೇ ಅಥವಾ ಆ ನೆಪದಲ್ಲಿ ತಮ್ಮ ಮಾನಸಿಕತೆ ಯನ್ನು ತಮ್ಮ ಅಧಿಕಾರ ಚಲಾವಣೆ ಮಾಡಿ ತೃಪ್ತಿ ಪಟ್ಟರು ಅನ್ನೋ ದೋ ಅಂತ ಗೊತ್ತಾಗದಷ್ಟು ಸೂಕ್ಷ್ಮ ಈ ವಿಚಾರ. ಏನೇ ಆದ್ರೂ ಇವರ ಎಲ್ಲ ದ್ವೇಷ ಕ್ಕೆ ಗುರಿಯಾಗಿದ್ದು ಮಾತ್ರ ಜನಿವಾರ (ಬ್ರಹ್ಮ ಜ್ಞಾನ ಸಾಧನೆಯ ಸಂಕೇತ ವಾದ ಪವಿತ್ರ ಯಜ್ಞೋಪವೀತ) ಬ್ರಹ್ಮ ಜ್ಞಾನ ಪಡ್ಕೋಂಡ್ ಇರೀ ಮೆಡಿಕಲ್ ಇಂಜಿನಿಯರಿಂಗ್ ಸಿ ಇ ಟಿ ಯಾಕ್ ಬೇಕು ಅಂತ ಅಪಹಾಸ್ಯ ಮಾಡೋ ಮಟ್ಟದ ಜನರೂ ಆಸುಪಾಸಿನಲ್ಲಿ ಇದ್ದೇ ಇದಾರೆ. (ಅವರ ಬಗ್ಗೆ ಎಲ್ಲ ತಲೆಬಿಸಿ ಮಾಡಿಕೊಳ್ಳಬಾರದಷ್ಟು ಪ್ರೌಢಿಮೆ ಇದೆ) . ಈ ಬಿಸಿನೆಸ್ ಮಾಡಲ್ ಆಗಿರೋ ವಿವಾದ ಗಳ ಆಯಸ್ಸು ಇಷ್ಟೇ, ಟೈಂ ಪಾಸ್ ಆದಂತೆ ಮರೆತು ಹೋಗೋ ವಿಚಾರವಾಗಿ , ಟೀವಿ ಟಿ ಆರ್ ಪಿ ಸೋಶಿಯಲ್ ಮೀಡಿಯಾ ಟ್ರೆಂಡ್ ಗೆ ಅಷ್ಟೇ ಸೀಮಿತವಾಗಿಸಿ ನಿಜವಾದ ಜಾಗೃತಿ ಮೂಡಿಸುವ ಯಾವುದೇ ಪ್ರಯೋಜನವಾಗಿಲ್ಲ(ಸಂಘ ಸಂಸ್ಥೆಗಳು ಮತ್ತು ಯಾವುದೇ ಸಂಘಟನೆ ಇದರ ಬಗ್ಗೆ ಹೆಚ್ಚು ಪ್ರಾಮುಖ್ಯತೆ ಕೊಡೋದಿಲ್ಲ) . ಪ್ರತಿಯೊಬ್ಬ ಯಜ್ಞೋಪವೀತ ಧಾರಿ ತನ್ನ ಕರ್ತವ್ಯವನ್ನು ತಿಳ್ಕೋಬೇಕು, ಇದಕ್ಕೆಲ್ಲ ಕಾರಣ ನಿಮಗೆ ನಿಮ್ಮ ಆಚರಣೆ ಸಂಪ್ರದಾಯ ಸಿಲ್ಲಿ ಅನ್ಸೋಕ್ ಶುರು ಆಯ್ತಲ್ಲ ಅದೇ ಮೂಲ, ಸಾರ್ವಜನಿಕ ಜೀವನದಲ್ಲಿ ಅನಿವಾರ್ಯ ಅಂತ ನಿಮ್ಮನ್ನು ನೀವು ಬಿಟ್ಟುಕೊಟ್ಟ ಪರಿಣಾಮ, ನಿಮ್ಮ ಜ್ಞಾನ ನಿಮ್ಮ ಪ್ರಯತ್ನ ದ ಮೇಲೆ ನಿಮಗಿಲ್ಲದ ಅರಿವು, ನಿಮ್ಮಿಂದ ಪ್ರಪಂಚದಲ್ಲಿ ಆಗಬಹುದಾದ ಎಷ್ಟೋ ಅದ್ಭುತಗಳ ಅರಿವು ಇಲ್ಲದಿರುವುದು.

ನಮ್ಮ ಜವಾಬ್ದಾರಿ ಏನು ಅಂದ್ರೆ, ನಾವು ಸರಿಯಾಗಿ ಇದ್ದೂ ನಮ್ಮ ಜೊತೆಗೆ ಬೇರೆಯವರ ನಡವಳಿಕೆ ನೂ ಸರಿಯಾಗಿ ಇರಲೇ ಬೇಕು ಅಂತ ನಡವಳಿಕೆ ಮೂಲಕ ತೋರಿಸಿ ಕೊಡುವುದು.

ಅದರಲ್ಲಿ ಈಗಿನ 2 ತಲೆಮಾರಿನ ಯುವ ಪೀಳಿಗೆ ವಿಫಲವಾಗಿದೆ, ಇನ್ನೂ ಅಳಿದುಳಿದ ಕೆಲವರಿಗೆ ಪ್ರಸ್ತುತ ಸಮಾಜದಲ್ಲಿ ನ ಇಂಥ ನಡವಳಿಕೆಗಳು ಅನನೋಕಾಗಲ್ಲ ಅನುಭವಿಸಕ್ಕೆ ಆಗಲ್ಲ.

ಹೆಗಲ ಮೇಲೆ ಕೈ ಹಾಕಿದಾಗ ಮುಗೀತು, ನೀನು ಅಂದ್ಕೋತೀಯಲ್ಲ "ಸಮಾಜದಲ್ಲಿ ನಾನು ನನ್ನ ಥರ ಇದ್ಬಿಟ್ರೆ  ಒಂಟಿ ಅಂತ" ನಿನ್ನ ತನ ಬಿಡ್ತೀಯ ಅದೇ ಮೊದಲ  ಸೋಲು.

 ನಿನ್ನ ತನ ವನ್ನು ನೀನು ನಿನ್ನ ಆಚರಣೆಗಳನ್ನು ನೀನು ಉಳಿಸಿ ಕೊಂಡುಹೋಗುವುದರ  ಫಲ ನಿನಗಷ್ಟೇ ಅಲ್ಲ ಎಲ್ಲರೂ ಅದರ ಫಲಾನುಭವಿಗಳಾಗುವಂತೆ ಮಾಡುವ ದೊಡ್ಡ ಗುರುತರಜವಾಬ್ದಾರಿ ಈ ಜನಿವಾರ ಕ್ಕೆ ಇದೆ, ಒಳ್ಳೆಯ ಮಾರ್ಗದಲ್ಲಿ ಜೀವನ ನಡೆಸಿ ಇತರಿಗೂ ಅದನ್ನು ತಿಳಿಸುವ ಜವಾಬ್ದಾರಿ ಈ ಜನಿವಾರ ಕ್ಕೆ ಇದೆ, ಈ ಜನಿವಾರ ದ ಮಹತ್ವ ವನ್ನು ತಿಳಿಯದೇ ನಾವುಗಳೇ ನಮ್ಮ ತನ ಬಿಟ್ಟು ಬದುಕುವಂತೆ ಮಾಡಲು ಅದರ ಮೇಲೆ ಈ ಬಂಡವಾಳ ಶಾಹಿ ಅಧಿಕಾರ ದಾಹಿ ಶಕ್ತಿ ಗಳು ಒಂದು ವ್ಯವಸ್ಥಿತ ಹಾಗೂ ಸತತವಾಗಿ ದಾಳಿ ನಡೆಸ್ತಿದೆ ಮತ್ತು ಭಾರತೀಯರು ಅದನ್ನು ಬೆಂಬಲಿಸುವ ಮೂಲಕ ತಮ್ಮ ಅಸ್ತಿತ್ವ ಕ್ಕೆ ತಾವೇ ಸಂಚಕಾರ ತಂದುಕೊಳ್ಳುತ್ತಿರುವುದು ವಿಷಾದನೀಯ . 

ಸಾರ್ವಜನಿಕ ವಾಗಿ ಇಂಥ ಅಸಭ್ಯ ವರ್ತನೆಗಳು ನಡೆದಾಗ, 

ಸಿನಿಮಾ ಕಾಲ್ಪನಿಕ ಅದೂ ಇದೂ ಅಂತ ಸಮರ್ಥನೆ ಮಾಡ್ಕೋತಿದ್ದ್ರು, (ಅನಿಷ್ಟ ಕ್ಕೆ ಶನೀಶ್ವರ ಕಾರಣ ಅನ್ನೋ ಹಾಗೆ ಎಲ್ಲ ರೀತಿಯ ಶೋಷಣೆಗಳಿಗೂ ಜನಿವಾರವನ್ನೇ ಹೊಣೆ ಮಾಡಿದರು) .

ಈಗ  ಎಂಥ ವಾಸ್ತವ ಸ್ಥಿತಿ ಇದೆ ಅಂತ ಅರ್ಥ ಆಗ್ತಿದೆ.. ಅವಕಾಶ ಸಿಕ್ಕಲ್ಲೆಲ್ಲ ಇದರ ತೇಜೋವಧೆ ನಡಿತಾನೇ ಇದೆ. ಈ ಮಟ್ಟಕ್ಕೆ ದ್ವೇಷ ಸಮಾಜದಲ್ಲಿ ಅದೂ ಅಧಿಕೃತವಾಗಿ.

ಜನಿವಾರದವರೇ ಕೇಳಿ! ಕೌಶಲ್ಯ ವೃದ್ಧಿಗೆ ಒತ್ತು ಕೊಡಿ ಒಂದು ಸರ್ಟಿಫಿಕೇಟ್ ಇಂದ ಏನೂ ಆಗಲ್ಲ. ನಿಮ್ಮನ್ನು ಸರ್ಟಿಫೈ ಮಾಡೋ ಯೋಗ್ಯತೆ ಇದೆಯೇ ಅಂತ ತಮ್ಮ ನ್ನು ತಾವು ಪ್ರಶ್ನೆ ಮಾಡ್ಕೊಳೋ ಮಟ್ಟದಲ್ಲಿ ಜೀವಿಸಿ, ಅದೇ ಉತ್ತರ.

 ಯೋಚನೆ ಮಾಡಿ!! ಅಸ್ತಿತ್ವಕ್ಕೆ ಜ್ಞಾನ ಮತ್ತು ಅನುಭವ ಎರಡೂ ಮುಖ್ಯ. ಹಿರಿಯರ ಅನುಭವದ ಮಾತು ಆಧುನಿಕ ಜ್ಞಾನ ಪ್ರಬುದ್ಧತೆ ಎರಡೂ ಇದ್ದರೆ ಮಾತ್ರ ಸಾಧ್ಯ.

ಸಂಪ್ರದಾಯ ನಿತ್ಯ ಅನುಷ್ಠಾನ ಸಾಧನೆ ಗೊಡ್ಡು ಅಲ್ಲ, ಅದರ ಹಿಂದೆ ಅಗಾಧ ಅನುಭವ ಮತ್ತು ಅರ್ಥ ಇದೆ, ಅದನ್ನ ಬಿಟ್ಟು ಹೋದ ಮೇಲೆ ಜೀವನದಲ್ಲಿ ಅಸ್ತಿತ್ವಕ್ಕೆ ಯಾವುದೇ ಅರ್ಥ ಇರೋದಿಲ್ಲ. ಪುಸ್ತಕ ನೋಡ್ಕೋಂಡ್ ಅಡುಗೆ ಮಾಡಿದ್ದೆಲ್ಲ ಒಂದೇ ಸ್ವಾದ ಪುಸ್ತಕ ನೋಡ್ಕೋಂಡ್ ನುಡಿಸಿದ್ದೆಲ್ಲ ಒಂದೇ ನಾದ ಬರೋ ಹಾಗಿದ್ದರೆ 🙂.

ಅಸ್ಥಿತ್ವವೇ ಜೀವನಾನುಭವ ಆ ಅನುಭವ ಆಚರಣೆ ಇಂದ ಮಾತ್ರ ಸಾಧ್ಯ , ನಮ್ಮನ್ನು ನಾವು ನಮ್ಮತನ ದಿಂದ ಬೇರೆಯಾಗಿ ನೋಡುವ ಊಹೇ ಯಾಕೆ!? ಪ್ರಪಂಚದಲ್ಲಿ ಆಧುನಿಕತೆ ಮತ್ತು ಪ್ರಗತಿ ಹೆಸರಲ್ಲಿ ನಡೆಯುವ ಈ ವ್ಯವಸ್ಥಿತ ಸಂಚು ನಿಮ್ಮ ಅಸ್ತಿತ್ವಕ್ಕೆ ಬಂದಿರುವ ಸವಾಲು. ಬರೀ ಅಧಿಕಾರದಲ್ಲಿ ಇದ್ದವರ  ಅಭಿಪ್ರಾಯಗಳೇ ಎಲ್ಲರಿಗೂ ವೇದ್ಯ ವಾಗಬೇಕೂ ಅನ್ನೋದು ಪರಮಾವಧಿ ಹಾಗೂ ಅಧಿಕೃತ ದಬ್ಬಾಳಿಕೆ.

ಇದೆಲ್ಲ ಬರೀ ವಿರೋಧಿಸಿ ಏನೂ ಪ್ರಯೋಜನವಿಲ್ಲ ನಮ್ಮ ತನ ನಮ್ಮ ಆಚರಣೆಗೆ ನಾವು ಮಹತ್ವ ಕೊಟ್ಟು ಅದರಂತೆ ನಡ್ಕೊಬೇಕು ಆಗ ನಮ್ಮಲ್ಲಿ ನಮಗೆ ಒಂದು ನಂಬಿಕೆ ಮೂಡೋದು.

ನಮ್ ಮೇಲೇ ನಮಗೆ ನಿಯಂತ್ರಣ ಇಲ್ಲ ದೇ ಆಧುನಿಕ ಯುಗದಲ್ಲಿ ದುರುದ್ದೇಶ ಪೂರಿತ ಪ್ರಭಾವ ದ ಹುಚ್ಚಾಟದ ಸೆಳೆತಕ್ಕೆ ಒಳಗಾಗಿ ಹುಸಿ ಜಾತ್ಯತೀತ ವಾದಕ್ಕೆ ಬಲಿಯಾಗಿ ನಿಮ್ ತನ ನೀವೇ ಕಳ್ಕೊಂಡಾಗ ನಿಮ್ಮ ಸಹಾಯಕ್ಕೆ ನಿಲ್ಲುವ ಸಾಮರ್ಥ್ಯ ಇಡೀ ಸಮುದಾಯಕ್ಕೆ ಇಲ್ಲದಿದ್ದರೆ ಆ ದೌರ್ಬಲ್ಯ ಕ್ಕೆ ನಿಮ್ಮ ಕೊಡುಗೆಯಾಗಿ ದೌರ್ಜನ್ಯ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ನಮ್ಮ ತನ ಇಡೀ ವಿಶ್ವದ ಒಳಿತಿಗಾಗಿ ಅತ್ಯಂತ ಮುಖ್ಯ.

ಯಜ್ಞೋಪವೀತಂ ಬಲಮಸ್ತು ತೇಜಃ||

 ಗೋ ಬ್ರಾಹ್ಮಣೇಭ್ಯ ಶುಭಂ ಭವತು

ಸರ್ವೇ ಜನಾಃ  ಸುಖಿನೋಭವಂತು 🙏.


 ಅನಿಕೇತನ ಶರ್ಮ

Friday, July 19, 2024

ದುಡ್ಡೇ ಸಮಸ್ಯೆ ನಾ...

 ಅನಿ'ಸಿಕೆ:-

ಫೇಸ್ ಬುಕ್ ಗೆ ಬಂದಾದ್ಮೇಲೆ ಬ್ಲಾಗ್ ಬರ್ಯೋದು ನಿಂತೇ ಹೋಗಿದೆ ಇರ್ಲಿ ಜನಕ್ ಯಾವ್ದ್ ಜಾಸ್ತಿ ತಲ್ಪುತ್ತೆ ಆ ಮಾಧ್ಯಮ ನೇ ಉಪ್ಯೋಗ್ಸಣ.

' ದುಡ್ಡು' , ಸಂಬಂಧ ವಿಶ್ವಾಸ ನ ಹಾಳ್ ಮಾಡು ತ್ತೆ ಅಂತಾರೆ ಪಾಪ ಎಲ್ಲರಿಗೂ ತಮ್ಮ ತಪ್ಪನ್ನು ಹೊರಿಸೋಕೆ ಪುನಃ ಉತ್ತರ ಕೊಡದೇ ಇರೋ ಒಂದ್ ವಸ್ತು ಬೇಕು..ಅಂಥ ಆಯ್ಕೆ ಯಾವಾಗಲೂ ಅವರಿಗಿಂತ ಕಡಿಮೆ ಬಲಶಾಲಿ ಅಸಹಾಯಕ ಅಥವಾ ಪ್ರತಿರೋಧ ಒಡ್ಡಲಾರದ್ದೇ ಆಗಿರುತ್ತದೆ ಅದರಲ್ಲಿ ಈ ದುಡ್ಡೂ ಒಂದು, ಅದು ಮಾತಾಡಲ್ಲ ನೋಡಿ ಅದೊಂದು ವಸ್ತು, ತಮ್ಮ ತಪ್ಪನ್ನು ಅದರ ಮೇಲೆ ಹೊರಿಸೋಕೆ ಸುಲಭ . ಇದೊಂದು ಸೂಕ್ಷ್ಮ ಹಾಗೂ ಮುಖ್ಯ ವಿಚಾರ. ಅದರ ಆಳ ತುಂಬಾ ಇದೆ ಅಷ್ಟೇ ಸರಳವಾಗಿ ಅರ್ಥ ಮಾಡ್ಕೋಬಹುದೂ ಕೂಡ, ಆ ಮನಸ್ಥಿತಿ ದೃಷ್ಟಿಯಿಂದ ನೋಡ್ಬೇಕು ಅಷ್ಟೇ.

ಈ ದುಡ್ಡೇ ಯಾಕೆ ಇಂಥ ದೋಷಾರೋಪ ಪಟ್ಟಿ ಗೆ ಹಣೆ ಆಗ್ಬೇಕು..!

ಅದ್ ಬಿಟ್ಟು ಬೇರೆ ಯಾವುದೂ ಅಂಥಾ ಬೆಲೆ ಬಾಳೋ ದು ಇಲ್ವ ಪ್ರಪಂಚದಲ್ಲಿ.. ಎಂಥೆಂಥಾದೆಲ್ಲ ಕೈ ತಪ್ಪಿದ ಉದಾಹರಣೆ ಇದೆ, ಇಡೀ ಜೀವನದಲ್ಲಿ ಏನೇನೆಲ್ಲ ಕಳ್ಕೊಂಡ್ ಇರ್ತೀವಿ, ಕೈ ತಪ್ಪಿ ಹೋಗಿರುತ್ತೆ ನಾವೇ ಬೇಡ ಹೋಗ್ಲಿ ಅಂಥ ಅಸಡ್ಡೆ ತೋರ್ಸಿರ್ತೀವಿ ಕೆಲವುಸಲ ಸ್ವಂತದವರನ್ನೂ .

ಆದ್ರೆ ಈ ದುಡ್ಡು ಕಳ್ಕೊತೀವಿ ಅಥವಾ ಕಳ್ಕೊಂಡ್ವಿ ಇಲ್ಲ ಬರಬೇಕಾದ್ದು ಬಂದಿಲ್ಲ ಕೊಡಬೇಕಾದೋರ್ ಕೊಟ್ಟಿಲ್ಲ,

 ನಾವು ಕೊಡಬೇಕಾದವರಿಗೆ ಕೊಡುವ ಸಮಯ ಬಂದಾಗ ನಮ್ಮ ಹತ್ತಿರ ಇಲ್ಲ ಅಂದಾಗ, ನಮಗೆ ಕೊಡಕ್ ಇಷ್ಟ ಇಲ್ಲ, ಕಷ್ಟ ದ್ರೂ ಕೊಡಬೇಕು ಅಂದಾಗ, ಆಗೋ ಒಂದ್ ಥರ ಅನುಭವ ಇದ್ಯಲ್ಲ, ಅದ್ರು ಮುಂದೆ ಸಂಬಂಧ ಪ್ರೀತಿ ಪ್ರೇಮ ವಿಶ್ವಾಸ ಗೌರವ ಅಭಿಮಾನ ಎಲ್ಲ ಪುಸ್ತಕದ ಬದನೇಕಾಯಿ ಅನ್ಸುತ್ತೆ . ಇದನ್ ಹೇಳೋಕು ಒಂದ್ ಧೈರ್ಯ ಬೇಕು (ಅದಕ್ ಬೆಲೆ ಕೊಡದೇ ಬದುಕೋಕೆ ಸಾಧ್ಯ ಇರೋ ವ್ಯವಸ್ಥೆ ಲಿ ಯಾರೂ ಇಲ್ಲ )

ಹೀಗೆಲ್ಲ ಅನ್ಸೋಕೆ ಕಾರಣ ಹಣ, ಆದ್ರೆ ತಪ್ಪು ಹಣದ್ದಾ..!! !?


ಯೋಚನೆ ಮಾಡ್ಳೇಬೇಕು ಎಷ್ಟು ದೊಡ್ಡ ವಿಚಾರ, ಒಡಹುಟ್ಟಿದವರು ಒಂದು ಜೀವ ಎರಡು ದೇಹ ಅಂದ್ಕೊಂಡೋರೂ ಈ ಒಂದು ವಸ್ತು ಗೋಸ್ಕರ ಏನೆನೆಲ್ಲ ಆಗೋದ್ರು .. :-)


ಎಷ್ಟೋ ಅಮೂಲ್ಯವಾದ ವಿಷೇಶವಾದ ಸಂಬಂಧ ಭಾವನೆ ಗಳು ಹಾಳಾದಾಗ್ಲೂ ಒಂದ್ ಥರ ಹೋಗ್ಲಿ ಬಿಡು ಅನ್ತೀವಿ, ಒಂದ್ ಮಟ್ಟಕ್ಕೆ ಬೇಜಾರಾಗಿದ್ರೂ ಓಕೆ ಸಹಿಸ್ಕೋತೀವಿ, ಆದ್ರೆ ಈ ಹಣಕ್ಕಾಗಿ ಮುಖವಾಡ ಹಣಕ್ಕಾಗಿ ದುಷ್ಕೃತ್ಯ ಹಣಕ್ಕಾಗಿ ಆಗೋ ದುರಂತ ಆ ಹಣಕ್ಕೆ ಅಂತ ನೇ ಆತ್ಮ ಸಾಕ್ಷಿ, ಮರ್ಯಾದೆ, ಕೆಲವರಂತೂ ಮಾರಾಟ ಆಗೋ ದರ್ಜೆ ಗೆ ಇಳಿದ ಜನ ತಮ್ಮನ್ನು ಮಾರಿಕೊಳ್ಳೋ ಮಟ್ಟದಲ್ಲಿ ಕೊನೆಯ ದಾಗಿ ಅದರಿಂದ ಪ್ರಾಣ ಬಿಡಬೇಕಾಗ್ ಬಂದರೂ ಮಟ್ಟಕ್ಕೆ ಬೇಕಾದರೂ ಜನ ಯೋಚನೆ ಮಾಡ್ತಾರೆ ಅಂದ್ರೆ... ಹ್ಮ್ 

 ದುಡ್ಡಿನ ವಿಷಯದಲ್ಲಿ ಉಳಿದ ಎಲ್ಲ ಕಿಂತ ಅದೇ ಒಂದ್ ಕೈ ಮೇಲೆ ಒಂದ್ ತೂಕ ಜಾಸ್ತಿ ಒಂದ್ ವಿಷೇಶ ಸ್ಥಾನ ಅದನ್ ಮಾತ್ರ ಬಿಟ್ಕೋಡಕ್ ತಯಾರಿರೋಕೆ ಸಾಧ್ಯ ಇಲ್ಲ ಯಾಕ್ ಹೀಗೆ..!? 


ಸರಿ ಈ ದುಡ್ಡಿಂದ ನೇ ಸಂತೋಷ ಅಂತ ಯಾಕ್ ಅನ್ಸುತ್ತೆ,.! ದುಡ್ಡು ಅಲ್ಟಿಮೇಟ್ ಅನ್ನೋ ಭಾವನೆ ಹೇಗೆ!? ದುಡ್ಡಿಂದನೇ ಯಾಕೆ ಎಲ್ಲ 'ದಿ ಎಂಡ್ಆಗ್ಬೇಕು!? ಪರಮ ಗುರಿ ದುಡ್ಡೇ ಯಾಕ್ ಆಗ್ಬೇಕು!? ಅಥವಾ ಪ್ರೀತಿ ಮೋಹ ದ್ವೇಶ ದುರಾಸೆ ಅಸೂಯೆ ಹುಟ್ಬೇಕು!?


ಅಲ್ವಾ ದುಡ್ಡೇ ಸಮಸ್ಯೆ ನಾ..


ನಿಜಕ್ಕೂ ಹೌದಾ..


ಯೋಚನೆ ಮಾಡಿ..


ಹೌದು 

ನಾವು ನೀವು ಕೂಡಿಡೋಕೆ, ಮತ್ತೆ ಲೆಕ್ಕ ಇಡೋಕೆ, ಚಲಾವಣೆ ಮಾಡೋಕೆ, ಅದರ ಪ್ರಭಾವದಿಂದ ಕೆಲಸ ಆಗೋಕೆ, ಕಾರಣ ಅದನ್ ಕೊಟ್ಟು ಮತ್ತೊಂದು ಸಿಗೋಕೆ ಸಾಧ್ಯ ಆಗಿರೋದು, ಅದೊಂದೇ ವಸ್ತು ದುಡ್ಡು..!!! ನಾನು ಸಂಭಾವಿತ, ಸಾತ್ವಿಕ , ಶ್ರೇಷ್ಠ, ಮನಸ್ಸಿಗೆ ಹತ್ತಿರವಾದವ, ಆಪ್ತ, ಒಡಹುಟ್ಟಿದವ ನನ್ನ ಮಾತಿಂದ ಏನಾದ್ರೂ ಕೆಲಸ ಆಗುತ್ತೆ ಅನ್ನೋದಾದರೆ, ಕೊನೆಗೆ ಅಲ್ಲಿ ಸಿಗುವ ವಸ್ತು ದುಡ್ಡೇ, ಅಥವಾ ಶಿಫಾರಸುಗಳು ಪ್ರಭಾವ ಬೈಗುಳ ಬೆದರಿಕೆ ಗಳ ಪರಿಣಾಮ ಕೆಲಸ ಏನೇ ಇರಲಿ ಕೊನೆಗೆ ಅಲ್ಲಿ ಸಿಗುವ ವಸ್ತು ಹಣ. ಈ ಒಳ್ಳೆಯ ತನ ಪ್ರಾಮಾಣಿಕತೆ ಅಥವಾ ಪ್ರಭಾವ ಬೆದರಿಕೆ ಗಳು ಬೇಗ ಸಿಗೋಹಾಗೆ ಅಥವಾ ಕೊಡಬೇಕಾದ ಹಣದಲ್ಲಿ ಸ್ವಲ್ಪ ರಿಯಾಯಿತಿ ಸಿಗೋ ಹಾಗೆ ಮಾಡಬಹುದು ಅಷ್ಟೇ, ಅಥವಾ ನಿಮ್ ಬದಲಿಗೆ ಇನ್ಯಾರಾದ್ರೂ ಅದನ್ನು ಕೊಡೋ ಜವಾಬ್ದಾರಿ ಹೊರಲೇ ಬೇಕು ಅದನ್ ಬಿಟ್ಟು ಬೇರೆ ಯಾವುದೇ ಆಯ್ಕೆ ಇರಲ್ಲ .

ಹೌದು ಎಲ್ಲದಕ್ಕೂ ಕಾರಣ 'ಹಣ'

 ಆ ಸ್ಥಾನ ದಲ್ಲಿ ಯಾವುದೇ ಇದ್ದರೂ, ಅದರ ಹೆಸರು ದುಡ್ಡು ಅಂತ ಇಲ್ಲದೆ ಇನ್ನೇನೇ ಇದ್ದರೂ, ಅದರ ಸಲುವಾಗಿ ನೇ ಎಲ್ಲ ಆಗ್ತಾ ಇದ್ದಿದ್ದು..


ನೀವು ಲೆಕ್ಕ ಇಡೋದು ಯಾವುದು ಮುಖ್ಯ ಅದನ್ನೇ..

ಇದು ಮುಖ್ಯ ಆಗಿದ್ದು ಹೇಗೆ ಅನ್ನೋ ತರ್ಕ ಕ್ಕೆ ಕೊನೆ.. !?

ಅದೇ ಅದರ ಚಲಾವಣೆ, ಸರಿ ಚಲಾವಣೆ ಯಾಕೆ ಅಂದ್ರೆ ಅದುಕ್ಕೆ ಬೆಲೆ ಇದೆ, ಅದಕ್ ಬೆಲೆ ಯಾಕೆ, ಅದನ್ ಕೊಟ್ಟಾಗ ನಮಗೆ ಅವಶ್ಯಕತೆ ಇರೋದು ನಮಗೆ ಸಿಗುತ್ತೆ. ಇಂಥ ಒಂದ್ ರೀತಿ ಮನೋಪಲೈಸ್ಡ್ ಸಿಸ್ಟಂ ಒಳಗೆ ಎಲ್ಲ ಇದೀವಿ ಹೀಗಿದ್ದೂ... 

ಮನುಷ್ಯನಿಗಿಂತ ದುಡ್ಡೇ ಮುಖ್ಯ ನಾ ಅಂತ ಕೇಳೋರ್ಗೆ ಒಂದ್ ಮಾತು, ಆ ದುಡ್ಡು ಮುಖ್ಯ ಅಲ್ಲ ಅಂದ್ಮೇಲೆ ನೀವು ಯಾಕೆ ಅದನ್ ಬಳಸ್ತೀರ, ಅದಿಲ್ಲದೇ ಬದುಕ್ತೀರ..! ಅದಿಲ್ಲ ಅಂದಾಗ ಅದರ ಅವಶ್ಯಕತೆ ಗಾಗಿ ಯಾಕ್ ಅದಕ್ ಇನ್ನೊಬ್ಬರ ಸಹಾಯ ತಗೊಂಡ್ರೀ.

ದುಡ್ಡು ಮುಖ್ಯ ಅಲ್ಲ ಅಂತ ಆವಾಗ್ ಲೇ ಬಿಡ್ಬೋದಿತ್ತಲ್ಲ, ದುಡ್ ಇಲ್ಲದೇ ಸಮಸ್ಯೆ ಬಗೆ ಹರ್ಸ್ಕೋತೀನಿ ಅಂತ. ಅದಿಲ್ಲ ಅಂದ್ರೆ ಏನು ಪರ್ವಾಗಿಲ್ಲ ಬದುಕ್ತೀನಿ ಅಂತ ..

ಸಾಧ್ಯ ಇಲ್ಲ ಅಲ್ವಾ..

ತಗೊಂಡಾಗ ಅದಕ್ಕೆ ಎಷ್ಟು ಪ್ರಾಮುಖ್ಯ ಇರುತ್ತೆ ಮತ್ತೆ ನೀವು ವಾಪಸ್ ಕೊಡಬೇಕು ಅಂದಾಗಲು ಅದಕ್ಕೆ ಅಷ್ಟೇ ಪ್ರಾಮುಖ್ಯತೆ ಕೊಡೋ ಏಕೈಕ ವಸ್ತು ದುಡ್ಡು ಹಣ..

 ಅದು ಮುಖ್ಯ ಅಂತ ಅಲ್ಲೇ ಸಾಬೀತು ಪಡ್ಸ್ತಿದೇ..


ವಿಚಾರ ಏನು ಅಂದ್ರೆ ದುಡ್ಡು ಎಲ್ಲರನು ಹೀಗ್ ಮಾಡಿದೆ ಅಂತ ಆಪಾದನೆ, ಹೌದು ಅದು ಹಾಗ್ ಮಾಡೇ ಮಾಡುತ್ತೆ ಮಾಡ್ಳೇಬೇಕು ಕೂಡ, ಅದು ಅದಕ್ಕಿರೋ ಮಹತ್ವ, ಶಕ್ತಿ ಸಾಮರ್ಥ್ಯ. ದುಡ್ಡು ಹಣ ಅಥವಾ ಅಂಥ ಬೆಲೆ ಇರೋ ಯಾವುದೇ ಕೇಂದ್ರೀಕೃತವಾದ ಒಂದ್ ವಸ್ತು, ವ್ಯವಸ್ಥೆ ಯಲ್ಲಿ ಯಾವುದೇ ಹೆಸರಿನಲ್ಲಿ ಇದ್ದರೂ ಅದರಿಂದ ಆಗೋ ಪರಿಣಾಮ ಇದೇ..

ಅದನ್ ಕೊಟ್ಟಾಗ ನಿಮ್ ಗೆ ಪರ್ಯಾಯವಾಗಿ ಇನ್ ಎಕ್ಸ್‌ಚೇಂಜ್ ಇನ್ ಎಕ್ಸೆರ್ಸೈಸ್ ಯು ಗೆಟ್ ಯುವರ್ ಡಿಸೈರ್ಡ್ ಥಿಂಗ್ ಅಂದ್ರೆ ಅದಕ್ಕಾಗಿ ಎಲ್ಲರೂ ಹೆಚ್ಚಿನ ಮಹತ್ವ ಕೊಟ್ಟೇ ಕೊಡ್ತಾರೆ..

ಆದ್ರೆ ನಿಜವಾದ ಸಮಸ್ಯೆ ಇರೋದು, ಅಷ್ಟೊಂದು ನಾವು ಅವಲಂಬಿಸಿರುವ ಒಂದ್ ವಸ್ತು ನಮಗೆ ಎಷ್ಟು ಮುಖ್ಯ ವೋ ಇನ್ನೊಬ್ಬರಿಗೂ ಅದೇ ಅನಿವಾರ್ಯ ಅಂತ ನಾವು ಭಾವಿಸಿಲ್ಲದೇ ಇರೋದರಲ್ಲಿ. ನಮ್ ಸಮಯಕ್ಕೆ ಅದ್ ಹೇಗಾದರೂ ಅದನ್ ಒಟ್ಟುಗೂಡಿಸಿ ನಮ್ಮ ಅವಶ್ಯಕತೆ ಪೂರೈಕೆ ಮಾಡಿಕೊಳ್ಳೋಕೆ ತೋರಿಸೋ ಆಸಕ್ತಿ ನ ಅದನ್ ವಾಪಸ್ ಕೊಡೋಕೊ ಇಲ್ಲ ಅದನ್ನ ಪಡೆದಿದ್ದಕ್ಕೆ ಅಷ್ಟೇ ಮೌಲ್ಯದ ಮತ್ತೊಂದನ್ನ ನಾವು ಹಿಂತಿರುಗಿಸೋದಕ್ಕೋ ತೋರಿಸದೇ ಇದ್ದಾಗ, ಸಂಬಂಧ ಸಂಸಾರ ಸಹವಾಸ ವಿಶ್ವಾಸ ಭಾವನೆ ಎಲ್ಲ ಪುಸ್ತಕದ ಬದನೆಕಾಯಿ ಅನ್ನೋದು ನಿಜ ಅನ್ಸುತ್ತೆ.. ಯಾಕೆ ಅಂದ್ರೆ ಆ ಹಣ ನಿಮಗೆ ಎಷ್ಟು ಮುಖ್ಯ ವೋ ಇನ್ನೊಬ್ಬರಿಗೂ ಅಷ್ಟೇ ಮುಖ್ಯ ಆಗಿರುತ್ತೆ ಅಲ್ವಾ.. ಅಂಥದ್ದನ್ನ ನೀವು ಮೋಸದಿಂದ ಅಥವಾ ನಿಮ್ಮ ನಯವಾದ ನಾಜೋಕಿನ ಮಾತಿಂದ ನಿಮ್ಮಮೇಲೆ ಇರೋ ನಂಬಿಕೆಯನ್ನೋ ಅದ್ಭುತವಾದ ಚಮತ್ಕಾರ ಪ್ರಭಾವ ಶಕ್ತಿ ಬಳಸಿ ನಿಮ್ಮದಾಗಿಸಿಕೊಳ್ಳೋ ಪ್ರಯತ್ನ ಮಾಡಿದಾಗ ಈ ವ್ಯವಸ್ಥೆ ಯ ಸಮತೋಲನ ತಪ್ಪೋದು, ಮತ್ತು ಅದರ ಅವಶ್ಯಕತೆ ಇದ್ದ ಮತ್ತೊಬ್ಬ ಅದರ ಮೇಲೆ ತನ್ನಹಕ್ಕುಸ್ಥಾಪನೆಗೆ ಮುಗಿಬೀಳೋದು.. ಮುಂದಿನದು ದುರಂತವಷ್ಟೇ.

ಅಲ್ವಾ ದುಡ್ಡೇ ಸಮಸ್ಯೆ ನಾ..


ನಿಜಕ್ಕೂ ಹೌದಾ..


ಯೋಚನೆ ಮಾಡಿ


ಅದನ್ ಎಷ್ಟು ಜಾಗರೂಕತೆಯಿಂದ ಗೌರವದಿಂದ ಸಂಪಾದಿಸಿ ಅವಶ್ಯಕತೆ ಗೆ ಅನುಗುಣವಾಗಿ ಮಾತ್ರ ಬಳಸಿದಾಗಲೇ ಅದು ಒಂದು ವರದಾನ.. ಅದಕ್ಕೆ ಅಂತ ಸಾಲ ಸುಳ್ಳು ಕಳ್ಳತನ ಮೋಸ ವಂಚನೆ ದುರ್ಮಾಗ ಅಥವಾ ಅದನ್ನು ದುರ್ಬಳಕೆ ಮಾಡಿದಾಗ ಪರಿಣಾಮ ಅನಾಹುತ ಬಿಟ್ಟು ಇನ್ನೇನೂ ಸಾಧ್ಯ ಇಲ್ಲ.

_ಇಂತಿ ನಿಮ್ಮ ಆತ್ಮೀಯ 

ಅನಿಕೇತನ ಶರ್ಮ

ಹ್ಯಾಪ್ಪಿ B :-) Y

Thursday, February 29, 2024

ಅನಿ'ಸಿಕೆ :- ಜೀವನದ ಬೀಳು ಏಳುಗಳಿಗೆ

 ಅನಿ'ಸಿಕೆ :- ಜೀವನದಲ್ಲಿ ಬೀಳು ಏಳು ಸಹಜ..

ಅದನ್ನೇ ದೊಡ್ಡ ಮ್ಯಾಟ್ರು ಮಾಡ್ಕೋಬೇಡ ಮನುಜ..

ಹೊಸದೇನಲ್ಲ ಬಿದ್ದು ನೋವ್ ಮಾಡ್ಕೋಳದು ಏಳದು ಸಾಧ್ಯ ಆದಷ್ಟು ಮುಂದೆ ಹೋಗಕ್ ಟ್ರೈ ಮಾಡೋದು..

 ಚಿಕ್ಕೋರಿಂದ ಆಗಿರೋದ್ ಅದೇ ಅಲ್ವಾ, ಬಿದ್ದು ಎದ್ದು ನಿಂತು ಅತ್ತು ಚಪ್ಪಾಳೆ ಸದ್ದು ಗಮನ ಸೆಳೆದು ಮತ್ತೆ ನಕ್ಕು ಏನೂ ಆಗಿಲ್ಲ ಎಂಬಂತೆ ಎಲ್ಲರೂಡನೆ ಇದ್ದು ಹೋಗೋದು ಜೀವನದ ಪ್ರತಿ ಹಂತದಲ್ಲೂ ತುಂಬಾ ಸಹಜ ಆಗೋಗಿದೆ ಬದುಕು ಇರೋದೇ ಹೀಗೆ.

ಆದ್ರೆ ಈ ಕಹಾನಿ ಮೆ ಟ್ವಿಸ್ಟ್ ಇರೋದ್ ಇಲ್ಲಿ.. ಈ ವಯಸ್ಸು ಅನ್ನೋ ವ್ಯತ್ಯಾಸ ಇದೆಯಲ್ಲ ಅದು. 

ಒಬ್ಬ ಮನುಷ್ಯ 4 ರಲ್ಲಿ ಬಿದ್ದು ಏಳೋದಕ್ಕೂ 40 ರಲ್ಲಿ ಬಿದ್ದು ಎದ್ದು ನಿಲ್ಲೋದಕ್ಕೂ ವ್ಯತ್ಯಾಸ ಇದೆ.. ಆಗ ಅನುಭವ ಇರಲ್ಲ ಬೀಳ್ತೀವಿ ಕಲಿಕೆ ಅದು ಸಹಜ ಹಾಗಂತ 40 ಆದಾಗ ಬಿಳಲ್ಲ ಅಂತ ಏನು ಗ್ಯಾರಂಟಿ ನ ಜೀವನದ ಫಾರ್ಮ್ಯಾಟ್ ಆ ದೋಡ್ಡೋರ್ ಆದ್ಮೇಲೇ ಯಾರೂ ಬಿಳೋದೇ ಇಲ್ಲ ಅಂತ.. 😂

ವಿಷಯ 4 ರಲ್ಲಿ ಬಿದ್ದಾಗ ಸಂತೈಸಿ ಆರೈಕೆ ಮಾಡಿದ ಕೈಗಳೇ 40 ರಲ್ಲು ಕಾಯ್ತಿರೋದು ಪುಣ್ಯ ಅದು  ತಾಯಿ ನನ್ನ ಅಮ್ಮ. ಮಗನ ಯೋಗಕ್ಷೇಮವೇ ತನ್ನ ಜೀವನದ ಪರಮಗುರಿ ಅಂತ ಬದುಕೋ ಜೀವ. ನಾನು ಏನ್ ಹೇಳಿದ್ರು ಏನ್ ಮಾಡಿದ್ರು ನಿಂಗ್ ನೀನೇ ಸಾಟಿ, ಕೆಲವು ಸಲ ಅಸಹನೆ ಅಸಹಾಯಕತೆ ಗೆ ಕೋಪ ತಾಪ ಸಹಜ  ನಾನು ಏರುದನಿಯಲ್ಲಿ ಮಾತಾಡಿ ಎಷ್ಟೋ ಬಾರಿ ನೋವ್ ಮಾಡಿರ್ತೀನಿ ಆದ್ರೆ ನನ್ನ ನೋವಲ್ಲಿ ಅದ್ಯಾವದು ನಿನಗೆ ನೆನಪಾಗಲ್ಲ ನೀನ್ ಅದೇ ಅಮ್ಮ, ನನಗೆ  ಮಾತ್ರ ನಾನು ದೋಡ್ಡೋನಾಗಿದೀನಿ ಅನ್ನೋ ಭ್ರಮೆ. 

ಈ 4 ಮತ್ತು 40 ರ ಬೀಳು ಏಳುಗಳಿಗೆ ಕಾರಣ ಏನಾದ್ರೂ ಇರ್ಲಿ ಸಂತೈಸಿ ಆರೈಕೆ ಮಾಡೋರು ಇದ್ರು, ಆದ್ರೆ ಪರಿಣಾಮ ಮಾತ್ರ ಬೇರೆ..

ನನ್ನ 4 ರಲ್ಲಿ ಇದ್ದ ಅಮ್ಮನ ಪ್ರಾಯ 40 ರಲ್ಲಿ ಇರಲ್ಲ ಆದ್ರೂ ಯೋಗಕ್ಷೇಮ ನೋಡೋದ್ ರಲ್ಲಿ ಏನೂ ವ್ಯತ್ಯಾಸ ಇಲ್ಲ. 4 ರಲ್ಲಿ ನಾನು ಎಳೇಕಂದ ಏನೂ ಅನಿಸುವುದಿಲ್ಲ, 40ರ ಈ ಧಡಿಯನಿಗೆ ಟೈಂ ಕೈ ಕಟ್ಟಿಹಾಕಿದಾಗ ಆಗೋ ಎಲ್ಲ ಅನಾನುಕೂಲ ಪ್ರತಿಯೊಂದಕ್ಕೂ ಅವಲಂಬನೆ ಸ್ವಾವಲಂಬಿ ವ್ಯಕ್ತಿಗೆ ಸವಾಲಾಗಿರೋ ಜೀವನ, ಯಾರು ಬೇಡ ಬದುಕನ್ನು ಸಮರ್ಥವಾಗಿ ಎದುರಿಸಬಲ್ಲೆ ನಾನು ಅಷ್ಟು ಶಕ್ತ ಎಂಬ ಆತ್ಮವಿಶ್ವಾಸ ಕ್ಕೆ ಇಂಥ ಪರಿಕ್ಷೆ ಅವಶ್ಯಕತೆ ಇತ್ತಾ.. ನನ್ನ ದೇ ನೇ ಇರಲಿ, ಅಮ್ಮ ನಿನ್ನ ಕಥೆ ಏನು! ನಾನು ಮನೆಲೇ ಇದ್ದ್ರು 4 ಮಾತು ಊಟತಿಂಡಿ ಕಂಪ್ಯೂಟರ್ ಇಷ್ಟೇ ಬದುಕು ಇದೇ ಸಾಧನೆ ಅಂತಿದ್ದರೆ ನೀನು ಇದ್ಯಾವುದನ್ನೂ ಲೆಕ್ಕಿಸದೇ ನಮ್ಮನ್ನು ಕಾಯೋ ಶಕ್ತಿ ಅಂತ ಮತ್ತೆ ಮತ್ತೆ ಪ್ರೂವ್ ಮಾಡ್ತಿದೀಯ.. ಬಹಳಸಲ ಅಂದ್ಕೋತೀನಿ ಈ ಅವಲಂಬನೆ ಒಳ್ಳೆಯದಲ್ಲ ಒಬ್ಬನೇ ಬದುಕಬೇಕಾದ ಪರಿಸ್ಥಿತಿ ಬಂದಾಗ ನನ್ನ ನಾನು ನೋಡ್ಕೋಳೋ ಕೆ ಸಿದ್ದ ಇರ್ಬೇಕು ಅಂತ. ಆದ್ರೆ ನೀನು ನನ್ನ ನೋಡ್ಕೊಳೋಹಾಗೆ ನಿನ್ನ ಹಾಗೆ ನಿನ್ನ ನೋಡ್ಕೋಳೋ ದು ನನಗೆ ಸಾಧ್ಯವಾ..!?

4 ರ ನಂತರ ಬದುಕು ಸುಲಭ 40 ನಂತರ ಅಷ್ಟು ಸುಲಭವಲ್ಲ ಇಲ್ಲಿ ಜವಾಬ್ದಾರಿ ಇದೆ ಉತ್ತರಿಸಬೇಕಾದ ಬಹಳಷ್ಟು ಮಂದಿ ಇದ್ದಾರೆ ಕಮಿಟ್ಮೆಂಟ್ ಇದೆ ಇದ್ಯಾವುದೂ ನಿನ್ ನೋಡ್ಕೋಳೋ ಕೆ ಸಹಾಯ ಮಾಡಲ್ಲ ನನ್ನ ಜೀವನ ಗುರಿ ಸಾಧನೆ ಅನ್ನೋ ಸ್ವಾರ್ಥ ಕ್ಕೆ ನಾನು ಕಟ್ಟುತ್ತಿರುವ ನನ್ನ ಪ್ರಪಂಚ.. ಎಷ್ಟು ವಿಚಿತ್ರ ನಿನಗೆ ಇದ್ಯಾವುದೂ ಅಷ್ಟು ಮುಖ್ಯ ಅಲ್ಲ ನನ್ನ ಯೋಗಕ್ಷೇಮ ಅಷ್ಟೇ .

ಆದ್ರೆ ನಾನು ನೀನು ಇರೋಕೆ ಇಷ್ಟೆಲ್ಲಾ ಬೇಕಾ..ಹಾಗಂತ ನಮ್ಮ ಪ್ರಪಂಚ ತುಂಬಾ ಚಿಕ್ಕದಲ್ಲ ನಾಲ್ಕಾರು ಜನ ಸಂಬಂಧ ಬಳಗ ಸಮಾರಂಭದಲ್ಲಿ ನಿನ್ ಮಗ ಕೂಡ ವಾರಗೆಯವರಂತೆ ಒಂದು ಚಂದದ ಕುಟುಂಬದೊಂದಿಗೆ ಸಮಾಜದ ಒಬ್ಬ ಪ್ರತಿಷ್ಠಿತ ವ್ಯಕ್ತಿಯಾಗಿ ಕಾಣಬೇಕಾದ್ದೂ ಅನಿವಾರ್ಯ ವೇ.. ಅಲ್ಲಿ ಎಲ್ಲರ ಪ್ರಶ್ನೆ ಗಳಿಗೆ ಉತ್ತರಿಸಬೇಕಾದವಳೂ ನೀನೇ ಎಲ್ಲಿಂದ ಎಲ್ಲಿಗೂ ನೀನೇ ನನ್ನ ಜೀವನದ ಬೀಳು ಏಳು ಗಳನ್ನು ಸಹಿಸಿಕೊಳ್ಳಬೇಕಾದವಳು.

ಅಲ್ವಾ

ನಂಗೊತ್ತು ಈಥರ ಫೇಸ್‌ಬುಕ್ ಅಲ್ಲಿ 4 ಜನರಮುಂದೆ ನಾನು ಅಸಹಾಯಕತೆ ಹಂಚಿಕೊಳ್ಳೋದು ನಿಂಗ್ ಇಷ್ಟ ಇಲ್ಲ, ಜನರ ದೃಷ್ಟಿಯಲ್ಲಿ ಚಿಕ್ಕೋನಾಗ್ತೀನಿ, ಬೆಲೆ ಇರಲ್ಲ.

ದೊಡ್ಡಸ್ಥಿಕೆಗಷ್ಟೇ ಈ ಸಮಾಜ ಬೆಲೆಕೊಡೋದು ಆದ್ರೂ ಇರ್ಲಿ, ನೋಡಿಸ್ವಾಮಿ ನಾವಿರೋದು ಹೀಗೆ. 

ನಾನೇನು ಕೊಡಬಲ್ಲೆ ನಿನಗೆ..

ನನ್ನ ಯೋಗಕ್ಷೇಮ ನನ್ನ ಸಂತಸದ ಹೊರತು.

 ಟೈಂ ಟೈಂ ಗೆ ನೀನ್ ಕರ್ದಾಗ ಬಂದು ಊಟ ತಿಂಡಿ ಮಾಡಿ ಆರೋಗ್ಯ ನೋಡ್ಕೊಂಡ್ ಚೆನ್ನಾಗಿ ಇದ್ರೆ ಸಾಕು ಅಷ್ಟೇ ನೀನ್ ಹೇಳೋದು ಯಾವಾಗಲೂ ಕೆಲಸ ಕೆಲಸ ಕೆಲಸ ಅದನ್ ಮಾಡ್ತಿರ್ತಿಯೋ ಗೊತ್ತಿಲ್ಲ ಪ ನೀನೋಬ್ನೇ ನಾ ಪ್ರಪಂಚದಲ್ಲಿ ಕೆಲಸ ಮಾಡೋದು ಊಟ ತಿಂಡಿ ನಿದ್ದೆ ಗೂ ಮೋಸ ಮಾಡ್ಕೊಂಡ್ ಅನ್ನೋ ನಿನ್ ಖಾರವಾದ ಮಾತಿನ ಹಿಂದೆ ಇರೋ ಸಿಹಿ ಅಕ್ಕರೆ ಕಾಳಜಿ ಗೇ ನಿನ್ನ ಅಮ್ಮ ಅನ್ನೋದು. 

ಬೀಳೋದು ಹವ್ಯಾಸ ಆಲ್ಲ ಆಕಸ್ಮಿಕ ಆದ್ರೆ ಜೀವನ ಬರೀ ಇಂಥ ಆಕಸ್ಮಿಕ ಗಳ ಸರಮಾಲೆಯೇ ಆಗಿದೆ ಸಾಂಧರ್ಬಿಕವಾಗಿ ವ್ಯಾವಹಾರಿಕ ವಾಗಿ ಎಲ್ಲದರಲ್ಲು ನನ್ನ ವಾಸ್ತವ ಬೀಳುಗಳೇ ನೀನು ಇನ್ನೆಷ್ಟು ಶಕ್ತಿಯನ್ನು ಒಗ್ಗೂಡಿಸಬೇಕು ನನ್ನ ಸಂತೈಸಲು ದಣಿದಿದ್ದೇನೆ ಅಂತ ಹೇಳ್ಬೇಕಿಲ್ಲ ನಿನಗೆ ಚೆನ್ನಾಗಿ ಗೊತ್ತು ಆದ್ರೆ ನೀನೂ ಅಷ್ಟೇ ಶಕ್ತಿಉಳಿಸಿಕೊಂಡಿರಬೇಕಲ್ಲ.

ದೈಹಿಕ ಮಾನಸಿಕ ಸಾಮರ್ಥ್ಯ ಸಂದರ್ಭ ಕ್ಕೆ ತಕ್ಕಂತೆ ಸಧೃಡವಾಗಿಸಲು ನಿನ್ನ ಆಶ್ರಯದಲ್ಲಿ ಸದಾ ಇದ್ದುಬಿಡಬೇಕು ನೀನೇ ಸರ್ವಶಕ್ತೆ ನನ್ನ ಪಾಲಿಗೆ ಅಂತ ಅನ್ನಿಸುತ್ತೆ. ಆದ್ರೆ ನಾನು 4 ರ ಪೋರನಲ್ಲ 40 ರ ಧೀರನಾಗಿ ಬದುಕು ಕಟ್ಟಿಕೊಳ್ಳಲು ಹಲವು ಸವಾಲುಗಳನ್ನು ಎದುರಿಸಲು ಮತ್ತೆ ಕೈ ಹಿಡಿದು ಮೇಲೆತ್ತಲು ನೀ ಪಡುವ ಪಾಡಿಗೆ ಒಂದ್ ಹಾಡಾದ್ರೂ ಮಾಡ್ಬೇಕು ನಿನ್ ಮನಸ್ಸು ಯಾವುದರಲ್ಲಿ ಆನಂದ ಪಡುತ್ತೋ ಅದನ್ನೇ ಮಾಡಿ ನಿನಗೆ ನನ್ನ ಧನ್ಯವಾದ ತಿಳ್ಸ್ಬೇಕು.. ಏನ್ ಕೊಡ್ಲಿ ನಿಂಗೆ ಕಷ್ಟದಲ್ಲಿ ಅಮ್ಮ ಅನ್ನೋದು ಬಿಟ್ಟರೆ ಬೇರೇನೂ ಗೊತ್ತಿಲ್ಲ.

Wednesday, August 31, 2016

ಅನಿ'ಹನಿ:- ಚುಟುಕುಗಳು



ಅನಿ'ಹನಿ:-
ನನ್ನ ಕಲ್ಪನೆಗೂ ತಿಳಿದಿಲ್ಲ ನಿನ್ನ ಹೊರತು ಬೇರೇನೂ..
ಇನ್ನು ಹೊರತಲ್ಲ ನಾನೂ, ಅಗಲಿ ಹೇಗಿರಲಿ ನಿನ್ನನ್ನು .
ತೆರೆಸಿ ಒಲವ ಕಣ್ಣನು, ತಣಿಸಿ ಮನದ ದಣಿವನು
ಬರೆಸೆ ಒಲವ ಗೀತೆಯನು ಕವಿತೆಯಾಗಿ ಅರಳಿದ
  :) ಭಾವ ಶಿಲ್ಪಿಯ ಒಲವಿನ ಪುತ್ತಳಿ ನೀನು..
ಅನಿಕೇತನ Happy B :) Y

ಅನಿ'ಹನಿ:-
ಕಳೆದ ನೆನಪುಗಳು ಮತ್ತೆ ಮತ್ತೆ ತಂದುಕೊಟ್ಟ ನಿನ್ನ
ಕಳೆದುಕೊಂಡೆ ಎನ್ನುವ ಮೂರ್ಖ ನಾ ..
ಕಳೆದ ನನ್ನ ಕಂಡುಕೊಳ್ಳುವ ಬಯಕೆ ನೆನೆಯುತ ನಿನ್ನ
ತೋರಿಸಲಾರರು ನಿನ್ನ ವಿನಹ , ಒಲವಾಗಬಹುದೆಂದು ನಿರೂಪಿಸಿ ನೀ ರೂಪಿಸಿದ ನನ್ನ :)
ಕಡೆಗಣ್ಣ ನೋಟದಿ ನೀ ಕಡೆದ ನನ್ನ ನೀನೇ ಕಡೆಗಾಣಿಸಿದರೂ .. ಕಡೆವರೆಗೂ ನೆನೆಯುವೆ ನಾ
ತೀರದ ಒಲವ ಋಣವಿರಲು ಮುಕ್ತನಾಗಬಹುದೇ ನಾ

ಇಂತಿ
ಅನಿಕೇತನ Happy B :) Y

ಅನಿ'ಹನಿ:-
ಹುಸಿಮುನಿಸ ಒಳಗಿನ ನಗುವಿನಲ್ಲಿ
ಕಾಡಿಸುತ ಕಳೆದ ದಿನವೆಲ್ಲಿ
ತಂಗಾಳಿ ಪಿಸುನುಡಿವ ಇರುಳಲ್ಲಿ
ಮನಮುಟ್ಟಿದ ಇನಿದನಿ ಎಲ್ಲಿ
ತುಸು ಮರೆವ ಮುನ್ನ ನೆನಪಿಸುತಿದ್ದೆ ಸವಿ ಸಂದೇಶವಾಗಿ
ಮರೆಯಲಾಗದ ನೆನಪಾಗಿ ಉಳಿದೆ
ಕನಸುಗಳು ತಿದ್ದಿ ತೀಡಿದ ಪ್ರತಿಬಿಂಬದ ಪ್ರತಿರೂಪವಾಗಿ

ಅನಿಕೇತನ Happy B :) Y

ಅನಿ'ಹನಿ:-
ನೂರು ಜನ್ಮಕೂ ನೂರಾರೂ ಜನ್ಮಕೂ
ನಿನ್ನ ನೆನಪಲ್ಲೇ ಈ ಬದುಕು
ನೆನಪಷ್ಟೇ ನೀ ಜನುಮ ಜನುಮಕೂ
ನಾನೆಂದೂ ಒಲವಿನ ಸೇವಕ
ನಾನಲ್ಲ ಅದರ ಮಾಲೀಕ

ವಿಧಿಯಾಟ ಯಾವ ಕೋಪಕೋ ಕರುಣೆ ಬಾರದು ಕಾಲಕೂ
ಅನಿಕೇತನ Happy B :) Y

ಅನಿ'ಹನಿ:-
ಎಂದೋ ಮುಗಿದ ಕಥೆಯ ನೆನಪಿನ ಮುದ್ರಣ
ಮತ್ತೆ ಮತ್ತೆ ಓದಬೇಕೆನಿಸುವ ಒಲವಿನ ಅಂಕಣ
ಕಣ್ಣಿಗೆ ಕಟ್ಟಿದಂತಿದೇ ಚಿತ್ರಣ
ತುಸೂ ಮಾಸದ ಬಣ್ಣ

ಅನಿಕೇತನ Happy B :) Y

ಅನಿ'ಹನಿ:-
ನಾನಂದು ಕೂಂಡ ಮಾತ್ರಕ್ಕೆ
ನೀನಾಗಲೇ ಬೇಕೆಂದಿಲ್ಲ ನನ್ನಾಕೆ
ಈ ಡೇರಲಿಲ್ಲ ನಾನಾಗುವ ಬಯಕೆ
ನಿನ್ನೊಲವ ಶೀರ್ಷಿಕೆ
ಆದರೆ ನೀನಾದೆ ಕಾವ್ಯ ಕನ್ನಿಕೆ
ಕಲ್ಪನೆಯ ಶಿಲಾ ಬಾಲಿಕೆ

ಅನಿಕೇತನ Happy B :) Y

ಅನಿ'ಹನಿ:-
ಗೆದ್ದವರಾರೂ ಇಲ್ಲ ಒಂದೇ ಪ್ರಯತ್ನಕೆ
ಸೋಲದೇ ಪ್ರೀತಿ ಹೃದಯದ ಮರು ಪ್ರಯತ್ನಕೆ
ಎಂದುಕೊಂಡರೆ
ಹುಚ್ಚುತನ ವಲ್ಲದೆ ಇನ್ನೇನು ಇದು
ಗೆಲ್ಲುವುದು ಪ್ರೀತಿಯ ವಾಡಿಕೆ , ಸೊಲುವುದೇ ಕಾಯಕ ಹೃದಯಕೆ
ಸೋಲೇ ಮುನ್ನುಡಿಯು ಪ್ರೇಮಕೆ, ಒಲವೇ ಅದರ ಶೀರ್ಷಿಕೆ .
ಅನಿಕೇತನ Happy B :) Y

ಅನಿ'ಹನಿ:-
ಎಣಿಕೆ ಗಳಿಕೆಯಲ್ಲಿ ಸೋತರೂ ಹೃದಯಕೆ
ಎಂದಿಗೂ ನಿನದೇ ಸವಿ ಕನವರಿಕೆ
ನನ್ನೊಲವೇ ನನನ್ನರಸಿ ಬಾ ಮನದ ಅಂತಃಪುರಕೆ
ನಲಿಯುತ ಸದಾ ನಗುತಿರು ಅರಸಿಯಾಗಿ ನನ್ನ ಒಲುಮೆಯ ಸಾಮ್ರಾಜ್ಯ ಕೆ
ಅನಿಕೇತನ Happy B :) Y

ಅನಿ'ಹನಿ:-
ತುಳಿಯದೇ ಸಪ್ತಪದಿ ತಿಳಿಯದೇ ಒಲವಹಾದಿ
ಬರಡಾಗುತಿದೆ ಬದುಕು ಬತ್ತಿರಲು ಭಾವಶರಧಿ
ಹಸನಾಗ ಬಹುದೇ ಬಾಳು ನೀ ಬರಲು ಕಾರಂಜಿ ತೆರದಿ
ಹಾಡುಬಾ ಹೊಸಬಾಳಿಗೆ ನಾಂದಿ ಅನುರಾಗ ಮೂಡಿಸೆ ಮನದಿ
ಮನೆ ಮನ ಬೆಳಗುವ ಮಡದಿ

ಅನಿಕೇತನ Happy B :) Y

Tuesday, August 30, 2016

ಅನಿ'ಕಥನ :- ಕಥೆ ಹೇಳುವ ಹೊಸ ಪ್ರಯತ್ನ

ಅನಿ'ಕಥನ :-
ಕಥೆ ಹೇಳುವ ಹೊಸ ಪ್ರಯತ್ನ   :) ಚಿಕ್ಕದಾಗಿ .
ಕಣ್ಮುಂದೆ ನಡೆವ ಎಷ್ಟೋ ಕಥೆಗಳು ಹೀಗೇ ಇದ್ರೂ ಒಂದೊಂದು ಅದರದೇ ವಿಶೇಷತೆ ಹೊಂದಿರುತ್ತೆ  .
ಹಾಗೇ ಇದೊಂದು .
ಪ್ರೀತಿ , :) ಹುಡ್ಗಿ ಹೆಸರಲ್ಲ. ಕಥೆ ವಸ್ತು, ಪಾತ್ರ ಎಲ್ವೂ..
ನಾ ಅಂದ್ಕೊಂಡಂಗೆ  RJ  ಆಗಿದ್ರೆ  on Air ಕೇಳಿ ಅಂತಿದ್ದೆ.  ಇವಾಗ ಓದಿ .. :)
ನಮ್ಮನ್ನ ಇಷ್ಟ ಪಡೋರನ್ನ ಪ್ರೀತ್ಸೋದ್ ಸಹಜ ಅದರಲ್ಲಿಯೂ ಅಸಹಜ ತಿರುವುಗಳೂ ಸಹಜವೇ ..
ಆದರೆ ವಿಶೇಷತೆ ಇರೋದು 
ನಮ್ಮನ್ನ ಇಷ್ಟ ಪಡ್ದೇಇರೋರ್ನ ಪ್ರೀತ್ಸೋದು  ಒಂದು ಮಟ್ಟಿಗೆ ಗ್ರೇಟ್ ಲವ್,  ಅದು ಅವರಿಗೆ ಗೊತ್ತಾಗ ಹಾಗ್ ನೋಡ್ಕೊಳೋದು ಯಾಕಂದ್ರೆ ನಾವಿಷ್ಟ ಇಲ್ಲ ಅಂದ್ಮೇಲ್ ಗೂತ್ತಾಗಿ ಏನ್ ಪ್ರಯೊಜನ. ಅದ್ ಸಾಲ್ದು ಅಂತ  ಅವ್ರೂ ಗೂತ್ತಿದ್ದು ಗೊತ್ತಿಲ್ದಂಗ್ ಇದ್ದು ಕದ್ದು ನೊಡಿ ಖುಷಿ ಪಡೋದು. ಆಮೇಲ್ ಗೊತ್ತಿದ್ದು ಗೊತ್ತಿದ್ದು ಇಷ್ಟ ಪಡೊದು , ಗೂತ್ತಾದ್ಮೇಲ್  ಏನೋ ಕಾರಣಕ್  ಹಿಂಗಲ್ಲ ಹಂಗೆ ಅಂತ ಸಮಜಾಯಿಷಿ ಕೊಟ್ ಫ್ರೆಂಡ್ಸ್ ಅನ್ನೊದು.
ಸಿಹಿ  ಕಹಿ ಆಗಿ ಬದಲಾಗುವ ಸತ್ಯ .
ಕೆಲವೊಮ್ಮೆ ಕೆಲವು ಸೂಕ್ಷ್ಮ ವಿಚಾರಗಳು ಎಂಥವರನ್ನು ಸಂಧಿಗ್ದಕ್ ತಂದ್ ಇಡ್ತವೆ , ನೋವಾಗದಂತೆ ನಡೆದುಕೊಳ್ಳಬೇಕೆಂಬ ಕಾಳಜಿ  , ವಾಸ್ತವ ದ ಜೂಜಾಟ ದಲ್ಲಿ ಸೋತ ಭಾವನೆಗಳ  ಒದ್ದಾಟ. ಗೂತ್ತಾದ್ಮೇಲ್ ಇನ್ನೇನು ..  ಹಠ ಬಿಡದ ತುಂಟಾಟ  ಮತ್ತೆ ಮತ್ತೆ ಅದೇಹಂಬಲ ಬದಲಾಗದ ಅದೃಷ್ಟಕ್ಕೆ  ಹರಕೆ ಹೊರುವ ಪೇಚಾಟ , ತುಂಟತನದ ಹಾವಳಿಗೆ ವಿರೊಧಿಸಲಾರದೇ ಬಲವಂತದ ಭಾವನೆಗಳ ಅತಿಕ್ರಮ ಪ್ರವೇಶ ಕೆ  ನಿರ್ಭಂಧ.  ನಿಷೇಧದ ವಿರೊಧದ ನಡುವೆಯೂ ಒಂದು ಮಾನವೀಯ  ಮಿಡಿತ , ಬೇಸರದಲ್ಲಿ ಪಾಲುದಾರರು,  ಸಂತಸ ಹಂಚಿಕೊಳ್ಳುವ ತವಕ ,  ಶುಭಾಶಯಗಳು , ಮಿತಿಮೀರದ ಮಾತಿನಲ್ಲಿ ಸಾರಾಂಶ ವಿನಿಮಯ, ಮಾತುಗಳಿಂದ ಹೇಳ ಲಾಗದ್ದನ್ನು  ಹೇಳಿಬಿಡುವ ಒಂದು ಮೌನ .
ಸೊಲು ಖಚಿತ ಅಂದಮೇಲೆ ಬೇಸರ ಉಚಿತ, ಕೆಲವೊಮ್ಮೆ ಸಮಾಧಾನಕ್ಕೆ ಅದು ನಂದಲ್ಲ ನನಗಲ್ಲ  ಅಂದ್ಕೂಳದು, ಬೇಡ ಬೇಡ ಎನ್ನುವಾಗ ಯಾವುದೋ ಕಾರಣಕ್ಕೆ ಮತ್ತೆ ಮತ್ತೆ ಬಂದೊದಗುವ ಭೇಟಿ ಗಳು ನಗುವಿನ ಕಿರಣಗಳು ಅರಳಿಸುವ ಮುದುಡಿದ ಒಲವಿನ ಹೂಗಳು, ವಿಧಿನಿಯಮಕೆ ಮಣಿದು ದೂರಾದಾಗ ಮತ್ತೆ ಬಾಡುವುದು. ಕೈಗೆಟುಕದ ಹುಣ್ಣಿಮೆಯ ಮರೆತು, ಪರ್ಯಾಯ ಬೆಳಕಿಗನೆಡೆಗೆ ಬಲವಂತದ ಬದಲಾವಣೆಗಳು ಅನಿವಾರ್ಯ ಎನಿಸುವುದು,  ಬೆಳಗಿನ ಬಿಸಿಲಿನ ಝಳಕ್ಕೆ ಹಗಲು ಕನಸು ಮಂಪರು ಮಂಪರು, ಹದವಾದ ಮನಸ್ಥಿತಿ ಕಾಯ್ದುಕೂಳ್ಳಲು ಹೆಣಗಿದ ಅದೃಷ್ಟ ವನ್ನ ಹಳಿದ , ಹೇಳಬಾರದೆಂದು ತಿಳಿದೂ ಹೇಳಿ ಭಾವನೆಗಳ ಮೇಲೆ ಆದ ಅಘಾತಗಳ ಹೊಣೆ ಗಾಗಿ ಅಪರಾಧಿ ಎನಿಸಿದರೂ, ಬೇಕಂತಲೇ ದೂರ ಸರಿದರೂ, ಒಬ್ಬರನ್ನೂಬ್ಬರು ದೂರದವರು ಹೇಳಿದ  ಮಾತು , ಈ ಪ್ರೀತಿ .
ಹೇಳಿದವರಿಗೆ ಸಿಹಿಯಾದರೂ... ಕೇಳಿದವರಿಗೆ ರುಚಿ ಎನಿಸಿದರೂ , ಸವಿಯಲಾರದೇ ಸವಿ ಸವಿ ನೆನಪಾದ ಅದೆಷ್ಟೋ ಜನರ ವ್ಯಥೆ ಈ ಪ್ರೀತಿ .
ಕಂಡು ಕಂಡು ಕುರುಡರಾದವರ ಕಂಡು ಮನಸ್ಸು ನೊಂದು ಹೇಳಿದ್ದು
ಹಿತವಾದ ನೋವು ಈ ಪ್ರೀತಿ  .
ಶೀರ್ಷಿಕೆ ಗೀತೆ :
  ಬಯಸದೇ ಬಯಸಿ ಬಸವಳಿದ ಮನದ ನಗು ನಿನ್ನ ನೆನಪು, ಅದೇ ಪ್ರೀತಿ  ..
ಸಂತಸಕ್ಕೂಮ್ಮೆ  ವ್ಯಂಗ್ಯಕ್ಕೊಮ್ಮೆ,  ಬಾಲಿಶ ಬಯಕೆಗಳ ಮುಗ್ದ ಮೊಂಡುತನ ಕ್ಕೊಮ್ಮೆ, ಮೊದಲ ತವಕ ಮತ್ತೆ ಮತ್ತೆ ನೆನೆವಾಗ ಆದ ಪುಳಕ ನೆನೆದು ಮತ್ತೆ ಮತ್ತೆ ,
ಬಯಸದೇ ಬಯಸಿ ಬಸವಳಿದ ಮನದ ನಗು ನಿನ್ನ ನೆನಪು ಅದೇ ಪ್ರೀತಿ  .
ಸಾಕಲ್ವ ಎಳೆ , 500 ಕಂತು ತುಂಬಿಸೋ ನವಿರಾದ ಧಾರಾವಾಹಿ ಗೆ. :) :)
ಸಾಕಾಗಿದೆ ಬೇಡಪ್ಪ ಬೇಡ ಟಾರ್ಚರ್ ಅಂತೀರಾ
- any ways its brought to u By
ಅನಿಕೇತನ ಹ್ಯಾಪಿ B :) Y

Friday, July 1, 2016

Weekend Recording Sessions for Begginers


One person or a duet* / session **
Basic Music technicalities about Voice culture,
Better possible exercise Turn to a good singer
Mic sense presentation skills
Bringing out possible Best out of ur voice timbr
Select a suitble/ fav Song
Try with comfort scale /Range
And finally Make ur own covers / unplugs record and share keep entertaining ... feel the joy

* jst because of spl attension n make singers to feel comfort / many cannot accept mistakes front of evry one so bring best in You.

**(Am not a teacher Pt , jst a friend with musical sense n patience to convey the same interested one can utilize)